Monday, March 22, 2010

ಮಳೆಯಲಿ ಬಿಸಿಲೆಘಾಟಿಯಲಿ.......

....ಮಳೆಯಲಿ....... ಕಿರಣನ ಜೊತೆಯಲಿ....ಬಿಸಿಲೆ ಘಾಟಿಯ ಹಾದಿಯಲಿ......
ಹಿಂದಿನ ಬ್ಲಾಗ್ ಬರಹ ಮಾಸಿದ ಹಾದಿಯಲ್ಲಿ ಮೂಡಿದ ಹೆಜ್ಜೆಗಳು ಇದರ ಸಾರಾಂಶ....

ನಾನು ನನ್ನೂರಿಗೆ ವರ್ಷದಲ್ಲಿ ಸುಮಾರು ನಾಲ್ಕು ಬಾರಿ ಹೋಗುತ್ತೇನೆ. ಒಂದು ದಿನದ ಭೇಟಿಗೆಂದು ಡಿಸೆಂಬರ್ ನಲ್ಲಿ

ಹೋದವನು ಮಗಳಿಗೆ ಉಚ್ಚಂಗಿ ದರ್ಶನ ಮಾಡಿಸೋಣವೆಂದು ಊರು ಸುತ್ತಲು ಹೊರಟೆ. ಗವಿಬೆಟ್ಟ,ಜುಳುಜುಳು ಹರಿಯುತ್ತಿದ್ದ ಆನೆ ಕಾಲುವೆ ಇವೆಲ್ಲವೂ ನನ್ನಲ್ಲಿ ಏನನ್ನೋ ಕಳೆದು ಕೊಂಡದ್ದು ಮರಳಿ ಪಡೆದಂತೆ ಅವ್ಯಕ್ತ ಆನಂದ ಮೂಡಿಸಿತು.ನನ್ನ ಮಗಳಿಗಂತೂ ಮಗುವನ್ನು ಮೊದಲ ಬಾರಿಗೆ ಜಾತ್ರೆಗೆ ಕರೆದುಕೊಂಡು ಹೋದಂತಾ ಸಂಭ್ರಮ!

ಬತ್ತದ ಗದ್ದೆಗೆ ಕಾಲಿಟ್ಟಾಗ ಬತ್ತದ ತೆನೆಯ ಸುವಾಸನೆ ಕಾಡಿನ ಗಂಧಗಾಳಿಯಲ್ಲಿ ಸೇರಿ ವಿಶಿಷ್ಟ ಪರಿಮಳವನ್ನು ಎಲ್ಲೆಡೆ ಹರಡಿತ್ತು.ಒಂದರ ಹಿಂದೊಂದು ನಿಂತ ಬೆಟ್ಟಸಾಲುಗಳ ಹಿಂದಿನಲ್ಲಿ ಪುಷ್ಪಗಿರಿ ಗಾಂಭೀರ್ಯದಿಂದ ನಿಂತಿತ್ತು.


ಇದರ ಮುಂದುವರೆದ ಭಾಗ ಪುಷ್ಪಗಿರಿ ಬೆಟ್ಟ ಸಾಲಿನಲ್ಲಿ ಮಳೆಗಾಲದಲ್ಲಿ ಅಡ್ಡಾಡಿದ ಅನುಭವವನ್ನು ನನ್ನ ಉಚ್ಚಂಗಿ ಬಳಗ ಬ್ಲಾಗಿನಲ್ಲಿದೆ.....ಇಲ್ಲಿಂದ ಅಲ್ಲಿಗೆ ಹೀಗೆ ಸಾಗಿ.....


Tuesday, March 16, 2010

ಚಿತ್ರ ನನ್ನದು ಕಲ್ಪನೆ ನಿಮ್ಮದು......!

ಚಿತ್ರ ನನ್ನದು ಕಲ್ಪನೆ ನಿಮ್ಮದು......!




ಯುಗಾದಿಯ ಹಾರ್ದಿಕ ಶುಭಾಶಯಗಳು

ನಾನು ನನ್ನ ಈ ಹಿಂದಿನ ಬ್ಲಾಗ್ ಪೋಸ್ಟಿನಲ್ಲಿ ಮೂರು ಚಿತ್ರಗಳನ್ನು ಹಾಕಿ ಯುಗಾದಿಯ ಕಲ್ಪನೆಗೆ ಓದುಗರಿಂದ ಬರಹಗಳನ್ನು ಆಹ್ವಾನಿಸಿದ್ದೆ.ಅನೇಕರು ಚಿತ್ರಗಳು ಚೆನ್ನಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಅನೇಕರು ಈ ಚಿತ್ರಗಳಿಗೆ ಯುಗಾದಿಯ ಚಿಂತನೆ ಕಳುಹಿಸಿದ್ದಾರೆ.ಈ ಮೂರೂ ಚಿತ್ರಗಳಿಗೂ ಹೊಂದಿಕೆಯಾಗುವಂತೆ ಸರಳ, ಸುಂದರ ಸಂದೇಶ ಕಳುಹಿಸಿದವರು ಬ್ಲಾಗಿಗ ಈಶ್ವರ "ಕಿರಣ" ಭಟ್ http://kiranakomme.wordpress.com/


ನನ್ನ ಚಿತ್ರಕ್ಕೆ “ ಕಿರಣ್ ”ಅವರ ಕಲ್ಪನೆಯಲ್ಲಿ ಯುಗಾದಿ ಹಾರೈಕೆ ಇಂತಿದೆ...


ಬಿದ್ದ ಹೂವು - ಬಿದ್ದ ನೋವಾಗಲಿ


ಆರಿಸಿದ ಹೂವು - ಹರಸಿದ ಬದುಕಾಗಲಿ


ಬೇವಿನ ಚಿಗುರು - ನೋವಿಗೆ ಕಹಿಯಾಗಲಿ


ಅಶ್ವಥದ ಚಿಗುರು ಸಮೃಧ್ಧ ಬದುಕಿಗೆ ಸಂಕೇತವಾಗಲಿ

ಎಂದು ಹಾರೈಸುತ್ತೇನೆ
ಈಶ್ವರ "ಕಿರಣ" ಭಟ್ http://kiranakomme.wordpress.com/
"ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ "

ಎಷ್ಟು ಅರ್ಥಗರ್ಭಿತ ಅಲ್ಲವೇ?


ಕಿರಣ್ ಅವರಿಗೆ ಧನ್ಯವಾದ...
ಇನ್ನು ಮುಂದೆಯೂ ಚಿತ್ರ-ಕಲ್ಪನೆ ವಿಭಾಗದಲ್ಲಿ ಚಿತ್ರಗಳನ್ನು ಹಾಕಿ ನಿಮ್ಮ ಅನಿಸಿಕೆಗಳನ್ನು ಆಹ್ವಾನಿಸುವ ಚಿಂತನೆ ನನಗಿದೆ.ನೀವುಗಳೂ ಸ್ಪಂದಿಸುತ್ತೀರೆಂಬ ವಿಶ್ವಾಸದಲ್ಲಿದ್ದೇನೆ...
ಯುಗಾದಿ ಚಿಂತನೆಯನ್ನು ಹಂಚಿಕೊಂಡ ವೀರೇಶ್ ತಾವರೆಕೆರೆ,"ಸಹಜ",ವಿಶ್ವಾಸ್ ಅವರಿಗೆ ಹಾಗೂ ಪ್ರತಿಕ್ರಿಯಿಸಿದ ಚುಕ್ಕಿಚಿತ್ತಾರ,ಶಂಭುಲಿಂಗ,ದೀಪಸ್ಮಿತ ಅವರಿಗೂ ನನ್ನ ಧನ್ಯವಾದಗಳು.ತಮಗೆಲ್ಲರಿಗೂ ಯುಗಾದಿಯ ಶುಭ ಹಾರೈಕೆಗಳು.
ಚುಕ್ಕಿಚಿತ್ತಾರ said...
chitragalu chennaagive..bellada chitravannoo haakiddare ugaadige bevu, bella aaguttittu....!
March 10, 2010 8:08 AM

ಶಂಭುಲಿಂಗ said...
ಚೆನ್ನಾಗಿದೆ ಚಿತ್ರಗಳು.
March 13, 2010 1:48 AM

Deepasmitha said...
ಒಳ್ಳೆಯ ಚಿತ್ರಗಳು. ಬೇವು ಬೆಲ್ಲ ಜೀವನದ ಅವಿಭಾಜ್ಯ ಅಂಗ. ಬೇವು ಕಹಿ ಇರಬಹುದು, ಆದರೆ ಅತ್ಯುತ್ತಮ ಔಷಧಿ. ಹಾಗೆಯೇ, ಕಹಿಯಾದ ಕಷ್ಟಗಳು ಒಂದರ್ಥದಲ್ಲಿ ಔಷಧಿಗಳೇ, ನಮಗೆ ಅಷ್ಟು ಬೇಗ ಗೊತ್ತಾಗುವುದಿಲ್ಲ ಅಷ್ಟೆ. ನಿಮಗೂ ಯುಗಾದಿಯ ಹಾರ್ದಿಕ ಶುಭಾಷಯಗಳು. ನಿಮ್ಮಿಂದ ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸುತ್ತಿದ್ದೇನೆ
March 14, 2010 4:02 AM

**** ಅಶೋಕ ಉಚ್ಚಂಗಿ *****

Wednesday, March 10, 2010

ಯುಗಾದಿ ಕಲ್ಪನೆ-- ಹಾಗೆ ಸುಮ್ಮನೆ....!!!



ಪ್ರಿಯ ಬ್ಲಾಗ್ ಮಿತ್ರರೇ.....
ಅನೇಕ ಬ್ಲಾಗ್ ಗೆಳೆಯರ ಲೇಖನವನ್ನು ಓದುತ್ತಿದ್ದಾಗ ನನ್ನ ಬ್ಲಾಗಿನಲ್ಲೂ ಹೊಸ ವಿಷಯಗಳನ್ನು ಬರೆಯಲು ಮನಸ್ಸು ಬರುತ್ತೆ.ಆದರೆ ಕೆಲಸದ ಒತ್ತಡ ಜೊತೆಗೆ ಸೋಮಾರಿತನದ ಸಲುವಾಗಿ ಸಾಧ್ಯವಾಗುತ್ತಿಲ್ಲ.
ಇಂದು ಏನಾದರು ಬರೆಯೋಣವೆಂದು ಕುಳಿತಾಗ ಹಾಗೆ ಸುಮ್ಮನೆ ಚಿತ್ರವೊಂದನ್ನು ಹಾಕೋಣ ಎಂದುಕೊಂಡೆ.ಬರಿ ಚಿತ್ರವನ್ನು ಹಾಕುವ ಬದಲಿಗೆ ಕಲ್ಪನೆಗೆ ಇಂಬು ನೀಡುವಂತಹ ಚಿತ್ರವನ್ನು ಹಾಕುವ ಮನಸ್ಸಾಯಿತು.ಯುಗಾದಿ ಹೇಗಿದ್ದರೂ ಹತ್ತಿರವಿದೆ...ಅದೇ ಗುಂಗಿನಲ್ಲಿದ್ದ ನನಗೆ ಯುಗಾದಿಗೆ ಸಂಬಂಧಿಸಿದಂತೆ ಛಾಯಾಚಿತ್ರವೊಂದನ್ನು ಹಾಕಿ ಬ್ಲಾಗಿಗರ ಕಲ್ಪನೆಯಲ್ಲಿ ಯುಗಾದಿಯ ಚಿಂತನೆ ಹೇಗೆ ವ್ಯಕ್ತವಾಗುತ್ತೆ ಎಂದು ನೋಡುವ ಮನಸ್ಸಾಯಿತು...ಇದೋ ಇಲ್ಲಿದೆ ಚಿತ್ರಗಳು.....ನಿಮ್ಮ ಕಲ್ಪನೆಯಲ್ಲಿ ಯುಗಾದಿಯ ಹಾದಿಯಲ್ಲಿನ ಪ್ರಕೃತಿ ಕವಿತೆಯಾಗಿ,ಹಾಡಾಗಿ,ಮನದಾಳದ ಮಾತಾಗಿ,ಚಿಂತನೆಯಾಗಿ,ಸೊಗಸಾದ ಪದಗಳನ್ನು ಜೋಡಿಸಿದ ಸುಂದರ ಸಾಲಾಗಿ ಹೊರಹೊಮ್ಮುತ್ತದೆಂದು ಭಾವಿಸಿದ್ದೇನೆ.ನಿಮ್ಮ ಇತರೆ ಬ್ಲಾಗ್ ಗೆಳೆಯರಿಗೂ ತಿಳಿಸಿ. ನನ್ನ ಪ್ರೊಫೈಲ್ ನಲ್ಲಿ ನನ್ನ ಇ ಮೇಲ್ ವಿಳಾಸವಿದೆ .....ನಿಮ್ಮ ಬರಹಗಳು ಇಲ್ಲಿಗೆ ತಲುಪಲಿ....ಅತ್ಯುತ್ತಮವಾದ ಬರಹಗಳು ಯುಗಾದಿಯ ಸಂದರ್ಭದಲ್ಲಿ ಇನ್ನಷ್ಟು ಚಿತ್ರಗಳ ಜೊತೆಗೆ ಇನ್ನೊಂದು ಬ್ಲಾಗ್ ಬರಹವಾಗಿ ಎಲ್ಲರಿಗೂ ತಲುಪಲಿದೆ...
ಖಂಡಿತಾ ಬರೀತೀರಿ ತಾನೇ.....?




ಚಿತ್ರಗಳು ಯುಗಾದಿಯ ಕಲ್ಪನೆಗಾಗಿ........
ಯಾವುದೇ ಚಿತ್ರಕ್ಕದರು ನಿಮ್ಮ ಕಲ್ಪನೆಯನ್ನು ಬರೆದು ಕಳಿಸಬಹುದು....